ಯಾರು ಏತಕೆ ಮುರಿದು ಬಿಸುಟರೋ
ನುಡಿವ ಮೋಹನ ಮುರಳಿಯ
ಯಾವ ಸ್ವಾರ್ಥದ ಗಳಿಕೆ ಇಹುದೋ
ಚಿವುಟಿ ತೆಗೆದರು ಚೈತ್ರವ.
ಮೌನ ಮೀರಿದ ಮಾತದೆಲ್ಲಿದೆ
ಮಾತು ಮೌನದ ತೊಟ್ಟಿಲು
ರಾಗವಿರದ ಹಾಡದೆಲ್ಲಿದೆ
ರಾಗ ಹಾಡಿನ ಮೆಟ್ಟಿಲು
ಸ್ಪರ್ಶವಿರದೇ ರಸವದೆಲ್ಲಿದೆ
ಬಾವ ಚಂದನ ಬತ್ತಲು.
ಮನಸು ಮುದುಡಿರೆ ಬರಿ ಶೂನ್ಯ ಬಾವ
ರಾಧೆ ಇರದೇ ಇಹನೆ ಮಾಧವ.
-ಶಶಕ (ಶರತ್ ಶರ್ಮ ಕಲಗಾರು)
No comments:
Post a Comment