Search This Blog

Monday, August 9, 2010

ನುಡಿವ ಮೋಹನ ಮುರಳಿ

ಯಾರು ಏತಕೆ ಮುರಿದು ಬಿಸುಟರೋ
ನುಡಿವ ಮೋಹನ ಮುರಳಿಯ
ಯಾವ ಸ್ವಾರ್ಥದ ಗಳಿಕೆ ಇಹುದೋ
ಚಿವುಟಿ ತೆಗೆದರು ಚೈತ್ರವ.
ಮೌನ ಮೀರಿದ ಮಾತದೆಲ್ಲಿದೆ
ಮಾತು ಮೌನದ ತೊಟ್ಟಿಲು
ರಾಗವಿರದ ಹಾಡದೆಲ್ಲಿದೆ
ರಾಗ ಹಾಡಿನ ಮೆಟ್ಟಿಲು
ಸ್ಪರ್ಶವಿರದೇ ರಸವದೆಲ್ಲಿದೆ
ಬಾವ ಚಂದನ ಬತ್ತಲು.
ಮನಸು ಮುದುಡಿರೆ ಬರಿ ಶೂನ್ಯ ಬಾವ
ರಾಧೆ ಇರದೇ ಇಹನೆ ಮಾಧವ.
                                 -ಶಶಕ (ಶರತ್ ಶರ್ಮ ಕಲಗಾರು)

No comments:

Post a Comment